ಬಂಟ್ವಾಳ :ಒಂದೇ ವರ್ಷದಲ್ಲಿ ಬದಲಾಯ್ತು ಕಲ್ಲಡ್ಕ ಪೇಟೆಯ ಚಿತ್ರಣ ; ಕೆಸರು, ಗುಂಡಿ, ಧೂಳಿನಿಂದ ಕಂಗೆಟ್ಟಿದ್ದವರು ನಿಟ್ಟುಸಿರು, ಟ್ರಾಫಿಕ್ ನಿರಾಳ, ಆಧುನಿಕ ಪೇಟೆಯತ್ತ ಜನರ ಚಿತ್ತ..

ಬಂಟ್ವಾಳ :ಒಂದೇ ವರ್ಷದಲ್ಲಿ ಬದಲಾಯ್ತು ಕಲ್ಲಡ್ಕ ಪೇಟೆಯ ಚಿತ್ರಣ ; ಕೆಸರು, ಗುಂಡಿ, ಧೂಳಿನಿಂದ ಕಂಗೆಟ್ಟಿದ್ದವರು ನಿಟ್ಟುಸಿರು, ಟ್ರಾಫಿಕ್ ನಿರಾಳ, ಆಧುನಿಕ ಪೇಟೆಯತ್ತ ಜನರ ಚಿತ್ತ..

ಬಂಟ್ವಾಳ : ಕಳೆದ ಕೆಲವು ವರ್ಷಗಳಿಂದ ಪ್ರತಿ ಮಳೆಗಾಲದಲ್ಲು ನರಕ ಸದೃಶವಾಗಿದ್ದ ಕಲ್ಲಡ್ಕ ಪೇಟೆ ಈಗ ನಿರಾಳವಾಗಿದೆ. ಕರ್ಕಶ ಹಾರ್ನ್, ಬೃಹತ್ ಗಾತ್ರದ ಟ್ರಕ್, ಲಾರಿಗಳ ಟ್ರಾಫಿಕ್ ಸಮಸ್ಯೆ ಇಲ್ಲವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು-  ಬೆಂಗಳೂರು ರಸ್ತೆಯಲ್ಲಿ ಸಿಗುವ ಬಂಟ್ವಾಳ ತಾಲೂಕಿನ ಪುಟ್ಟ ಪೇಟೆ ಕಲ್ಲಡ್ಕ ವಾಹನ ಪ್ರಯಾಣಿಕರಿಗೆ ಕಿರಿ ಕಿರಿ ರಹಿತ ಪ್ರಯಾಣಕ್ಕೆ ತೆರೆದುಕೊಂಡಿದೆ. ಕಲ್ಲಡ್ಕ ಮತ್ತೆ ಎಂದಿನಂತೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ನಾಲ್ಕೈದು ವರ್ಷಗಳಿಂದ ಸಂಕಷ್ಟ ಪಟ್ಟಿದ್ದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಸುಮಾರು 2.1 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣಗೊಂಡು ಒಂದು ಬದಿಯಲ್ಲಿ ಸಂಚಾರ ಆರಂಭಗೊಂಡ ಮೇಲೆ ಜನರು ಕೆಳಗಡೆ ಹೇಗಿದೆ ಅಂತಲೂ ತಿರುಗಿ ನೋಡುತ್ತಿಲ್ಲ. ಸಮಯದ ಮಿತಿಯೊಳಗೇ ಜೀವನ ನಡೆಯುವ ವೇಗದ ದಿನಗಳಲ್ಲಿ ಸುಲಭದ ಫ್ಲೈಓವರ್ ನಲ್ಲಿ ಮೇಲೇರುವ ಬದಲು ಸರ್ವೀಸ್ ರೋಡ್ ಗಿಳಿದು ಪೇಟೆ ಸೌಂದರ್ಯ ವೀಕ್ಷಿಸುವವರ ಸಂಖ್ಯೆ ಕಡಿಮೆ. ಕಲ್ಲಡ್ಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳುವವರು, ಕಲ್ಲಡ್ಕದ ಪೇಟೆಯಲ್ಲಿ ವ್ಯವಹಾರ ಹೊಂದಿರುವವರು, ವಿಟ್ಲ ಭಾಗಗಳಿಗೆ ತೆರಳುವವರು, ಒಳರಸ್ತೆಗಳಿಗೆ ಸಾಗುವವರು ಮಾತ್ರ ಫ್ಲೈಓವರ್ ನಲ್ಲಿ ಸಾಗದೆ ಸರ್ವೀಸ್ ರಸ್ತೆಗಿಳಿದು ಪೇಟೆ ಸಂಚರಿಸುತ್ತಾರೆ. ನೇರ ಹಾದು ಹೋಗುವವರು ಮೇಲ್ಸೇತುವೆಯಲ್ಲೇ ಸಂಚರಿಸುತ್ತಾರೆ.‌

ಹೇಗಿದ್ದ ಪೇಟೆ, ಹೇಗಾಯ್ತು ಈಗ..? 

ವಾಹನಗಳ ಸದ್ದಡಗಿದ್ದು ಮಾತ್ರವಲ್ಲ, ಮೇಲ್ಸೇತುವೆಯಿಂದಾಗಿ ಕಲ್ಲಡ್ಕ ಪೇಟೆಯ ಚಿತ್ರಣ ಬದಲಾಗಿದೆ. ಆದರೆ ಮೊದಲಿದ್ದ ಬ್ಯಾಂಕು, ಸೊಸೈಟಿ, ಅಂಗಡಿ ಕಚೇರಿ ಸ್ಥಾನ ಪಲ್ಲಟ ಆಗಿಲ್ಲ. ರಸ್ತೆ ಅಗಲಗೊಂಡ ಕಾರಣ, ಸಮಸ್ಯೆಗಳು ಕಡಿಮೆಯಾಗಿವೆ, ಜೊತೆಗೆ ಆಕರ್ಷಣೆ ಹೆಚ್ಚಿದೆ. ಮೇಲ್ಗಡೆ ಸೇತುವೆ ನೋಡುತ್ತ ನಿಂತರೆ ಆಧುನಿಕ ನಗರದ ಭಾವನೆ ಮನಸ್ಸಿಗೆ ಬರುತ್ತದೆ. ಕಲ್ಲಡ್ಕ ಪೇಟೆಯ ಹಳೆ ಸೊಗಡಿನ ಚಹಾದ ಹೋಟೆಲ್ ಗಳ ಮುಂದೆ ಪರವೂರಿನ ವಾಹನಗಳು ನಿಲ್ಲುವುದಕ್ಕೆ ಬ್ರೇಕ್ ಬಿದ್ದಿದೆ. ಹಿಂದಿ‌ನ ಕಲ್ಲಡ್ಕದಲ್ಲಿ ಲಾರಿಯೋ ಬಸ್ಸೋ ಹಾಳಾಗಿ ನಿಂತರೆ, ವಾಹನ ದಟ್ಟಣೆ ಆಗುತ್ತಿತ್ತು. ಈಗ ರಸ್ತೆ ಅಗಲಗೊಂಡಿದ್ದು ಮತ್ತು ಹೆಚ್ಚಿನ ದೊಡ್ಡ ವಾಹನಗಳು ಮೇಲಿನಿಂದ ಸಾಗುತ್ತಿರುವುದರಿಂದ ಹಿಂದಿ‌ನ ಸಮಸ್ಯೆ ಇಲ್ಲ.


ಸರ್ವೀಸ್ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ಕೆಲವು ಬಸ್ಸುಗಳು ಫ್ಲೈಓವರ್ ಆದಿಯಲ್ಲೇ ಪ್ರಯಾಣಿಕರನ್ನು ಇಳಿಸಿಹೋಗುತ್ತಿವೆ. ಇದರಿಂದ ಪ್ರಯಾಣಿಕರು ಬಸ್ ಇಳಿದು ನಡೆದುಹೋಗುವ ಪ್ರಮೇಯ ಎದುರಾಗಿದೆ. ಕೆಲಸ ಮುಗಿದ ಬಳಿಕ ರಸ್ತೆ ಸಂಚಾರಕ್ಕೆ ತೆರವಾಗುವ ಕಾರಣ, ಇದು ತಾತ್ಕಾಲಿಕ ಸಮಸ್ಯೆ ಎಂದು ಅಧಿಕಾರಿಗಳು ಹೇಳುತ್ತಾರೆ. ವರ್ಷದ ಹಿಂದಿನ ಸ್ಥಿತಿ ನೋಡಿದರೆ ಮೇಲ್ಸೇತುವೆ ಬೇಗನೆ ಮುಗಿಯಲ್ಲ ಎನ್ನುವ ಸ್ಥಿತಿಯಿತ್ತು. ಕಳೆದೊಂದು ವರ್ಷದಲ್ಲಿ ಕಾಮಗಾರಿಗೆ ವೇಗ ಸಿಕ್ಕಿರುವುದು ಹೆದ್ದಾರಿ ಕಾರಣದಿಂದ ಧೂಳು, ಕೆಸರು, ಗುಂಡಿಯಿಂದ ಕಂಗೆಟ್ಟು ಹೋಗಿದ್ದ ಪ್ರಯಾಣಿಕರು, ವಾಹನ ಸವಾರರು ಹುಸ್ಸಪ್ಪಾ ಎನಿಸುವಂತಾಗಿದೆ. 

ಕಲ್ಲಡ್ಕದ ಫ್ಲೈಓವರ್ ಎರಡು ಕಿಮೀ ಉದ್ದಕ್ಕೆ ದೀರ್ಘವಾಗಿರುವ ಹಿನ್ನೆಲೆಯಲ್ಲಿ ಅಡಿ ಭಾಗದಲ್ಲಿ ಪರ್ಯಾಯ ಸದುಪಯೋಗ ಏನು ಮಾಡಬಹುದು ಎಂಬ ಚಿಂತನೆಗಳು ಆಗಿಲ್ಲ. ಸದ್ಯ ಇದರೊಳಗೆ ವಾಹನಗಳು ಬಾರದೇ ಇರುವಂತೆ ನಡುವೆ ಮಣ್ಣು ಸುರಿಯಲಾಗಿದೆ. ಭವಿಷ್ಯದಲ್ಲಿ ಮಾದರಿ ಫ್ಲೈಓವರ್ ಮಾಡುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.


Ads on article

Advertise in articles 1

advertising articles 2

Advertise under the article