ಜೋಧಪುರ :ಹೊಟ್ಟೆಕಿಚ್ಚಿನಿಂದ ಅಕ್ಕನ ಮಗುವನ್ನೇ ಸಾಯಿಸಿದ ಕ್ರೂರಿ ತಂಗಿಯರು..!!

ಜೋಧಪುರ :ಮದುವೆಯಾಗದ ಕಾರಣಕ್ಕೆ ನಾಲ್ವರು ಯುವತಿಯರು ಅಕ್ಕನ ಮಗುವನ್ನೇ ಸಾಯಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 17 ದಿನದ ಮಗುವನ್ನು ವಾಮಾಚಾರದ ಹೆಸರಿನಲ್ಲಿ ಹತ್ಯೆ ಮಾಡಿದ್ದು, ಹೀಗೆ ಮಾಡಿದರೆ ಮದುವೆಯಾಗುವುದಾಗಿ ಅವರಿಗೆ ಯಾರೋ ತಿಳಿಸಿದ್ದಾರೆ. ಮಗುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದು, ವಿಷಯ ತಿಳಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭಾರಿ ಸಂಚಲನ ಮೂಡಿಸಿದೆ.
ಪೊಲೀಸರ ಪ್ರಕಾರ, ಜೋಧ್ಪುರದ ನೆಹರು ನಗರ ಕಾಲೋನಿಯಲ್ಲಿ ನಾಲ್ವರು ಯುವತಿಯರು ವಾಸಿಸುತ್ತಿದ್ದಾರೆ. ಓರ್ವ ಸಹೋದರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಆಕೆಗೆ ಹೆರಿಗೆಯಾಗಿದೆ. ಆದರೆ ಈ ನಾಲ್ವರಿಗೆ ವಯಸ್ಸಾದರೂ ಇನ್ನೂ ಮದುವೆಯಾಗಿಲ್ಲ. ಕಳೆದ ಕೆಲವು ವರ್ಷಗಳಿಂದ ಅವರು ಮದುವೆಗಾಗಿ ಹುಡುಗನನ್ನು ಹುಡುಕುತ್ತಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದು ಈ ನಾಲ್ವರು ಸಹೋದರಿಯರ ಅಸಹನೆಯನ್ನು ಹೆಚ್ಚಿಸಿದೆ. ಇದೇ ಸಂದರ್ಭದಲ್ಲಿ ಒಂದೂವರೆ ತಿಂಗಳ ಹಿಂದೆ ಗುಜರಾತ್ನಿಂದ ಅವರ ಸಹೋದರಿ ಸುಮನ್ ಹೆರಿಗೆಗಾಗಿ ಮನೆಗೆ ಬಂದರು. 17 ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದರು.
ಮಗುವನ್ನು ದೇವರಿಗೆ ಬಲಿ ನೀಡಿದರೆ ಮದುವೆಯಾಗುತ್ತೇವೆ ಎಂದು ನಾಲ್ವರು ಸಹೋದರಿಯರು ನಂಬಿದ್ದರು. ಈ ಕ್ರಮದಲ್ಲಿ, ಶುಕ್ರವಾರ (ನವೆಂಬರ್ 14) ತಮ್ಮ ಸಹೋದರಿ ಸ್ನಾನಗೃಹಕ್ಕೆ ಹೋದಾಗ ನಾಲ್ವರು ಮಗುವನ್ನು ತಮ್ಮ ಕೋಣೆಗೆ ಕರೆದೊಯ್ದರು. ನಂತರ ಅವರು ಮಗುವಿನ ಬಾಯಿ ಮುಚ್ಚಿ ಕಾಲು ಮತ್ತು ತೋಳುಗಳನ್ನು ಮುರಿದು ಕೊಂದರು. ನಂತರ ಅವರು ವಾಮಾಚಾರ ಮಾಡಲು ಪ್ರಾರಂಭಿಸಿದರು . ಒರ್ವ ಮಹಿಳೆ ಮಗುವಿನ ದೇಹವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಮಂತ್ರಗಳನ್ನು ಪಠಿಸುತ್ತಿದ್ದರೆ, ಉಳಿದವರು ಕುಳಿತು ಮಂತ್ರಗಳನ್ನು ಪಠಿಸುತ್ತಿದ್ದರು. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಘಟನೆಯ ಬಗ್ಗೆ ಮಗುವಿನ ತಂದೆ ದುಃಖ ವ್ಯಕ್ತಪಡಿಸಿದ್ದು, ಘಟನೆ ನಡೆದ ದಿನ ಬೆಳಗಿನ ಜಾವ 3.30ಕ್ಕೆ ತನ್ನ ಪತ್ನಿ ತನಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದಾಳೆ ಎಂದು ಹೇಳಿದ್ದಾರೆ. ‘ಈ ಬಗ್ಗೆ ನನ್ನ ಹೆಂಡತಿ ನನಗೆ ಹೇಳಿದಾಗ, ಮಗು ರಾತ್ರಿ ವೇಳೆ ಬಿದ್ದು ಹೋಗಿದೆ ಎಂದು ನಾನು ಮೊದಲು ಭಾವಿಸಿದ್ದೆ. ಆದರೆ ನಂತರ ಅವರು ಅವನ ಕಾಲುಗಳು ಮತ್ತು ತೋಳುಗಳನ್ನು ಮುರಿದು ಕೊಂದಿದ್ದಾರೆ ಎಂದು ನನಗೆ ತಿಳಿಯಿತು. ಈ ನಾಲ್ವರು ಸಹೋದರಿಯರು ಅಸೂಯೆ ಪಟ್ಟಿದ್ದರು. ತಮ್ಮ ಸೋದರಿಗೆ ಮದುವೆಯಾಗಿ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಆದರೆ ಅವರಿಗೆ ಇನ್ನೂ ಮದುವೆಯಾಗದಿದ್ದಾಗ ತಾಳ್ಮೆ ಕಳೆದುಕೊಂಡಿದ್ದರು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಸಹೋದರಿಯರನ್ನು ಬಂಧಿಸಿದ್ದಾರೆ.