ನವದೆಹಲಿ :ಕೆಂಪು ಕೋಟೆ ಸ್ಫೋಟ ಪ್ರಕರಣ; ಶಂಕಿತ ಭಯೋತ್ಪಾದಕನ ಗುರುತು ಪತ್ತೆ!!

ನವದೆಹಲಿ :ಕೆಂಪು ಕೋಟೆ ಸ್ಫೋಟ ಪ್ರಕರಣ; ಶಂಕಿತ ಭಯೋತ್ಪಾದಕನ ಗುರುತು ಪತ್ತೆ!!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ  ಕೆಂಪು ಕೋಟೆ  ಬಳಿ ಸೋಮವಾರ ಸಂಜೆ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 11 ಜನ ಸಾವನ್ನಪ್ಪಿದ್ದಾರೆ.

ಇದೀಗ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನೊಳಗೆ ಶಂಕಿತನಿದ್ದ ವಿಡಿಯೋ ರಿಲೀಸ್ ಆಗಿದೆ.

ಸೋಮವಾರ ಸಂಜೆ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟಕ್ಕೆ ಸಂಬಂಧಿಸಿದಂತೆ ಹೊಸ ಸಿಸಿಟಿವಿ ಫೋಟೋಗಳು ಮತ್ತು ವೀಡಿಯೊವೊಂದು ಹೊರಬಂದಿದ್ದು, ಕನಿಷ್ಠ ಎಂಟು ಜನರು ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡಿದ್ದಾರೆ.

 ಈ ಘಟನೆ ನವೆಂಬರ್ 10 ರಂದು ಸಂಜೆ 6.22 ಕ್ಕೆ ನಡೆದಿದ್ದು, ಹುಂಡೈ ಐ20 ಕಾರನ್ನು ಚಾಲನೆ ಮಾಡುತ್ತಿರುವ ವ್ಯಕ್ತಿಯನ್ನು ತೋರಿಸುತ್ತದೆ. ಅದೇ ವಾಹನವು ನಂತರ ಕೆಂಪು ಕೋಟೆ ಬಳಿಯ ಸುಭಾಷ್ ಮಾರ್ಗ್ ಟ್ರಾಫಿಕ್ ಸಿಗ್ನಲ್ನಲ್ಲಿ ಸ್ಫೋಟಗೊಂಡಿತ್ತು. ಮೂಲಗಳ ಪ್ರಕಾರ, ಘಟನೆ ನಡೆಯುವ ಮೊದಲು ಆ ವ್ಯಕ್ತಿ ಸಂಬಂಧಿಕರನ್ನು ಬಿಡಲು ಹಳೆ ದೆಹಲಿ ರೈಲು ನಿಲ್ದಾಣಕ್ಕೆ ಹೋಗಿದ್ದನು. ಸಿಸಿಟಿವಿ ದೃಶ್ಯಾವಳಿಗಳ ಸ್ಕ್ರೀನ್ಶಾಟ್ಗಳು ಚಾಲಕನ ಮುಖವನ್ನು ಸ್ಪಷ್ಟವಾಗಿ ಸೆರೆಹಿಡಿಯುತ್ತವೆ.

Ads on article

Advertise in articles 1

advertising articles 2

Advertise under the article