ಬೆಂಗಳೂರು :ಸ್ನೇಹಿತೆಯ ರೂಮ್​ಗೆ ಕರೆದೊಯ್ದು BBM ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ ಯುವಕ..!!

ಬೆಂಗಳೂರು :ಸ್ನೇಹಿತೆಯ ರೂಮ್​ಗೆ ಕರೆದೊಯ್ದು BBM ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ ಯುವಕ..!!

ಬೆಂಗಳೂರು : ಬಿಬಿಎಂ ವಿದ್ಯಾರ್ಥಿನಿಯೋರ್ವಳನ್ನು ಯುವಕ  ಹತ್ಯೆ ಮಾಡಿರುವ ಘಟನೆ ಮಾದನಾಯನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯಲ್ಲಿ ನಡೆದಿದೆ.

ಕೊಲೆಯಾದ ವಿದ್ಯಾರ್ಥಿನಿಯನ್ನ ದೇವಿಶ್ರೀ (21) ಎಂದು ಗುರುತಿಸಲಾಗಿದೆ. ದೇವಿಶ್ರೀ ಬೆಂಗಳೂರಿನ ಕಾಲೇಜೊಂದರಲ್ಲಿ ಓದುತ್ತಿದ್ದಳು. ನಿನ್ನೆ ಬೆಳಗ್ಗೆ ಈಕೆ ಆರೋಪಿ ಪ್ರೇಮವರ್ಧನ್ ಜೊತೆ ತೆರಳಿದ್ದಾಳೆ. ದೇವಿಶ್ರೀಯನ್ನ ಸ್ನೇಹಿತೆಯ ರೂಮ್ ಗೆ ಕರೆದುಕೊಂಡು ಹೋಗಿ ಕೊಂದಿದ್ದಾನೆ ಎನ್ನಲಾಗಿದೆ.

ಸ್ನೇಹಿತೆಯ ರೂಮ್ ಗೆ ಕರೆದುಕೊಂಡ ಹೋದ ಯುವಕ ಪ್ರೇಮವರ್ಧನ್ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ . ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆಂಧ್ರ ಮೂಲದ ದೇವಿಶ್ರೀ ಬೆಂಗಳೂರಲ್ಲಿ ಓದುತ್ತಿದ್ದಳು. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ads on article

Advertise in articles 1

advertising articles 2

Advertise under the article