ಒಡಿಶಾ: ಅನೈತಿಕ ಸಂಬಂಧದಲ್ಲಿ ಜಗಳ ;ಸೀಮೆಎಣ್ಣೆ ಸುರಿದು ನಿವೃತ್ತ ಇನ್ಸ್‌ಪೆಕ್ಟರನ್ನು ಸುಟ್ಟ ಮಹಿಳೆ..!!

ಒಡಿಶಾ: ಅನೈತಿಕ ಸಂಬಂಧದಲ್ಲಿ ಜಗಳ ;ಸೀಮೆಎಣ್ಣೆ ಸುರಿದು ನಿವೃತ್ತ ಇನ್ಸ್‌ಪೆಕ್ಟರನ್ನು ಸುಟ್ಟ ಮಹಿಳೆ..!!

ಭುವನೇಶ್ವರ: ಅನೈತಿಕ ಸಂಬಂಧದಲ್ಲಿ ಮನಸ್ತಾಪ ಉಂಟಾಗಿದ್ದು, ಮಹಿಳೆಯೊಬ್ಬರು ನಿವೃತ್ತ ಇನ್ಸ್ಪೆಕ್ಟರ್ ಮೇಲೆ ಸೀಮೆಎಣ್ಣೆ ಸುರಿದು ಕೊಲೆ ಮಾಡಿರುವ ಘಟನೆ ಒಡಿಶಾದ ಬೆರ್ಹಾಂಪುರದಲ್ಲಿ ನಡೆದಿದೆ.

ಮೃತರನ್ನು ನಿವೃತ್ತ ಪೊಲೀಸ್ ಅಧಿಕಾರಿ ಹರಿಹರ ಸಾಹು ಹಾಗೂ ಆರೋಪಿ ಮಹಿಳೆಯನ್ನು ಸುದೇಶ್ನಾ ಜೇನಾ ಎಂದು ಗುರುತಿಸಲಾಗಿದೆ.

ಸಾಹು ಅವರನ್ನು ಬೆರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಳಿಗಾಗಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆಗೆ ಫಲಕಾರಿಯಾಗದೇ ಸಾಹು ಸಾವನ್ನಪ್ಪಿದ್ದಾರೆ.

ಘಟನೆಯ ಬಳಿಕ ಅಧಿಕಾರಿ ಸಾಹು ಅವರ ಮಗಳು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮೃತ ಅಧಿಕಾರಿಯ ಮನೆಯಲ್ಲಿ ಆರೋಪಿತೆ ಬಾಡಿಗೆಗಿದ್ದರು. ಬಳಿಕ ಅಧಿಕಾರಿ ಹಾಗೂ ಮಹಿಳೆಯ ನಡುವೆ ಸಂಬಂಧ ಬೆಳೆದಿತ್ತು. ಆದರೆ ಕೆಲವು ಸಮಯದ ನಂತರ ಮಹಿಳೆ ಹಾಗೂ ಅಧಿಕಾರಿಯ ನಡುವೆ ಮನಸ್ತಾಪ ಉಂಟಾಗಿದ್ದು, ಜಗಳಕ್ಕೆ ಕಾರಣವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸೀಮೆ ಎಣ್ಣೆ ಸುರಿದು ಅಧಿಕಾರಿಯನ್ನು ಮಹಿಳೆ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.


Ads on article

Advertise in articles 1

advertising articles 2

Advertise under the article