ಬೆಂಗಳೂರು :ಉಸಿರಾಟಕ್ಕೆ ತೊಂದರೆ ದುರಂತಕ್ಕೆ ಕಾರಣ: ವೈದ್ಯರ ಸ್ಪಷ್ಟನೆ; ಮೃತರ ವಿವರ ಇಲ್ಲಿದೆ.

ಬೆಂಗಳೂರು :ಉಸಿರಾಟಕ್ಕೆ ತೊಂದರೆ ದುರಂತಕ್ಕೆ ಕಾರಣ: ವೈದ್ಯರ ಸ್ಪಷ್ಟನೆ; ಮೃತರ ವಿವರ ಇಲ್ಲಿದೆ.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025ರ ಟ್ರೋಫಿ ಗೆದ್ದ ವಿಜಯೋತ್ಸವ ಕಾರ್ಯಕ್ರಮದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಒಟ್ಟು 11ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ.

ಉಸಿರಾಡಲು ಸಾಧ್ಯವಾಗಲಾರದ್ದೇ ದುರಂತ ಸಾವಿಗೆ ಕಾರಣ ಎಂದು ವೈದೇಹಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ಆಸ್ಪತ್ರೆಗಳ ಮಾಹಿತಿ ಪ್ರಕಾರ, ಮೃತರ ಹೆಸರುಗಳು, ವಯಸ್ಸು ಮತ್ತು ಚಿಕಿತ್ಸೆ ಪಡೆಯುತ್ತಿರುವವರ ವಿವರಗಳು ಬಹಿರಂಗವಾಗಿವೆ.

ವೈದೇಹಿ ಆಸ್ಪತ್ರೆಯಲ್ಲಿ – 4 ಮೃತರು

ಭೂಮಿಕ್ – 20 ವರ್ಷ
ಸಹನಾ – 19 ವರ್ಷ
20 ವರ್ಷದ ಯುವಕ
35 ವರ್ಷದ ವ್ಯಕ್ತಿ
ಇಲ್ಲಿ ಇನ್ನೂ 12 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದವರು – ಓರ್ವ ಸಾವು
ಚಿನ್ಮಯಿ – 19 ವರ್ಷ
ಈ ಆಸ್ಪತ್ರೆಯಲ್ಲಿ ಇತರ 6 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬೌರಿಂಗ್ ಆಸ್ಪತ್ರೆಯಲ್ಲಿ– 6 ಮಂದಿ ಸಾವು

– ದಿವ್ಯಾಂಶಿ – 13 ವರ್ಷದ ಬಾಲಕಿ
– ದಿಯಾ – 26 ವರ್ಷದ ಯುವತಿ
-:ಶ್ರವಣ್ – 21 ವರ್ಷದ ಯುವಕ
– ಅಪರಿಚಿತ ಬಾಲಕಿ
– 17 ವರ್ಷದ ಅಪರಿಚಿತ ಯುವಕ
– ಅಪರಿಚಿತ ವ್ಯಕ್ತಿ, ವಯಸ್ಸು, ಹೆಸರು ಗುರುತು ಪತ್ತೆಯಾಗಿಲ್ಲ.
ಬೌರಿಂಗ್ ಆಸ್ಪತ್ರೆಯಲ್ಲಿ ನಿಧಿ, ರಕ್ಷಿತಾ, ಹೀನಾ, ಶಾಮಿಲಿ ಹಾಗೂ ಅನುಜ್ ಇವರಿಗೆ ತೀವ್ರವಾದ ಗಾಯಗಳಿಂದ ಬಳಲುತ್ತಿದ್ದಾರೆ. ಇನ್ನು ಕೆಲವರ ಸ್ಥಿತಿ ಗಂಭೀರವಾಗಿದೆ.
ಒಟ್ಟು ಸಾವು: 11
ತೀವ್ರ ಗಾಯಗೊಂಡ (12+6+5) 23ಕ್ಕೂ ಹೆಚ್ಚು ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುಥತಿದ್ದಾರೆ.

ನಿಗದಿತ ಗೇಟ್‌ಗಳ ಮೂಲಕ ಪ್ರವೇಶ ನಿಯಂತ್ರಣ ಸಾಧ್ಯವಾಗದ ಕಾರಣ ನೂಕುನುಗ್ಗಲು ಉಂಟಾಯಿತು ಎನ್ನಲಾಗಿದೆ.

ಮಂಡ್ಯ ಜಿಲ್ಲೆಯ ಯುವಕ ಪೂರ್ಣಚಂದ್ರ (25) ಸಾವಿಗೀಡಾಗಿದ್ದಾರೆ. ಮೃತ ಪೂರ್ಣಚಂದ್ರ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ರಾಯಸಮುದ್ರ ಗ್ರಾಮದವರು. ಸಿವಿಲ್ ಎಂಜಿನಿಯರಿಂಗ್‌ ಶಿಕ್ಷಣ ಪಡೆದಿದ್ದ ಅವರು ಮೈಸೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಕ್ರಿಕೆಟ್ ಹಾಗೂ RCB ತಂಡದ ಅಭಿಮಾನಿಯಾಗಿದ್ದ ಪೂರ್ಣಚಂದ್ರ, ತಮ್ಮ ಸ್ನೇಹಿತರೊಂದಿಗೆ RCB ಸಂಭ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದರು.

Ads on article

Advertise in articles 1

advertising articles 2

Advertise under the article