ಬೆಂಗಳೂರು :ಮಾರಕಾಸ್ತ್ರಗಳಿಂದ ಕೊಚ್ಚಿ ಮಂಗಳಮುಖಿಯ ಬರ್ಬರ ಹತ್ಯೆ; ಕೋಟಿ ಕೋಟಿ ಆಸ್ತಿಗಾಗಿ ಗಂಡನೇ ಕೊಲೆ ಮಾಡಿರುವ  ಶಂಕೆ..!!

ಬೆಂಗಳೂರು :ಮಾರಕಾಸ್ತ್ರಗಳಿಂದ ಕೊಚ್ಚಿ ಮಂಗಳಮುಖಿಯ ಬರ್ಬರ ಹತ್ಯೆ; ಕೋಟಿ ಕೋಟಿ ಆಸ್ತಿಗಾಗಿ ಗಂಡನೇ ಕೊಲೆ ಮಾಡಿರುವ ಶಂಕೆ..!!

ಬೆಂಗಳೂರು : ಮಂಗಳಮುಖಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಮಾಡಿರುವ ಘಟನೆ ಬೆಂಗಳೂರಿನ ಕೆಆರ್ ಪುರಂ ನ ಬಸವೇಶ್ವರ ನಗರದ ಗಾಯತ್ರಿ ಲೇಔಟ್‌ನ ಮನೆಯೊಂದರಲ್ಲಿ ನಡೆದಿದೆ.

ಮಂಗಳಮುಖಿ ತನುಶ್ರೀ (40) ಎಂಬುವವರ ಹತ್ಯೆಯಾಗಿದ್ದು, ಅವರು ಕರವೇ ಕಾರ್ಯಕರ್ತೆಯೂ ಆಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಮೂರು ತಿಂಗಳ ಹಿಂದೆಯೇ ಜಗನ್ನಾಥ್ ಎಂಬುವವರ ಜೊತೆ ತನುಶ್ರೀ ಮದುವೆಯಾಗಿದ್ದರು. ಮೂರು ದಿನಗಳ ಹಿಂದೆಯೇ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪತಿ ಜಗನ್ನಾಥ್ ಹಾಗೂ ಮನೆಗೆಲಸದಾಕೆ ಪರಾರಿಯಾಗಿದ್ದಾರೆ.

ಕೋಟಿ-ಕೋಟಿ ಆಸ್ತಿ ಹೊಂದಿದ್ದ ತನುಶ್ರೀ ಆಸ್ತಿಗಾಗಿಯೇ ಆಕೆಯ ಕೊಲೆಯನ್ನು ಗಂಡನೆ ಮಾಡಿದ್ದಾನೆಂಬ ಅನುಮಾನ ಮೂಡಿದೆ. ಕೊಲೆಯಾದ ತನುಶ್ರೀ ಸಂಗಮ ಎಂಬ ಎನ್‌ಜಿಒ ಸಹ ನಡೆಸುತ್ತಿದ್ದರು. ಸ್ಥಳಕ್ಕೆ ಕೆಆರ್ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Ads on article

Advertise in articles 1

advertising articles 2

Advertise under the article